ಪಾತಾಳ ವೆಂಕಟ್ರಮಣ ಭಟ್ಟರಿಗೆ ಅಗರಿ ಪ್ರಶಸ್ತಿ ಪ್ರದಾನ
ಲೇಖಕರು : ವಿಜಯ ಕರ್ನಾಟಕ
ಮ೦ಗಳವಾರ, ಡಿಸೆ೦ಬರ್ 29 , 2015
|
ಡಿಸೆ೦ಬರ್ 29, 2015
|
ಪಾತಾಳ ವೆಂಕಟ್ರಮಣ ಭಟ್ಟರಿಗೆ ಅಗರಿ ಪ್ರಶಸ್ತಿ ಪ್ರದಾನ
ಸುರತ್ಕಲ್ :
ಯಕ್ಷಗಾನ ಕಲೆ ಮತ್ತಷ್ಟು ಕ್ರಿಯಾಶೀಲತೆ ರೂಢಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಹಿರಿಯ ಕಲಾವಿದರು ಮಾರ್ಗದರ್ಶನ ನೀಡಬೇಕು ಎಂದು ಸಾಹಿತಿ ಡಾ.ತಾಳ್ತಜೆ ವಸಂತ ಕುಮಾರ್ ಹೇಳಿದರು.
ಸುರತ್ಕಲ್ನ ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣಾ ವೇದಿಕೆ ವತಿಯಿಂದ ನೀಡಲಾಗುವ ಅಗರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶುಕ್ರವಾರ ಅವರು ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣೆ ಮತ್ತು ಅಭಿನಂದನಾ ಭಾಷಣ ಮಾಡಿದರು.
ಅಗರಿ ಶ್ರೀನಿವಾಸ ಭಾಗವತ ಅವರಂತಹ ಹಿರಿಯ ತಲೆಮಾರಿನ ಯಕ್ಷಗಾನ ಕಲಾವಿದರ ಸಾಧನೆ ಆದರ್ಶಗಳು ಕಿರಿಯರಿಗೆ ಮಾರ್ಗದರ್ಶಕವಾಬೇಕು ಎಂದರು.
10ನೇ ವರ್ಷದ ಅಗರಿ ಪ್ರಶಸ್ತಿಯನ್ನು ಪ್ರಸಿದ್ಧ ಸ್ತ್ರೀ ವೇಷಧಾರಿ ಪಾತಾಳ ವೆಂಕಟ್ರಮಣ ಭಟ್ಟರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿಯ 10 ಸಾವಿರ ರೂ. ನಗದು, ಸ್ಮರಣಿಕೆ ಪ್ರಶಸ್ತಿ ಪತ್ರ ಒಳಗೊಂಡಿದೆ.
ಸನ್ಮಾನ ಸ್ವೀಕರಿಸಿ ಪಾತಾಳ ವೆಂಕಟ್ರಮಣ ಭಟ್ಟ ಮಾತನಾಡಿದರು. ಹರಿದಾಸ ವಾದೀಶ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಿನ್ಸಿಪಾಲ್ ಪ್ರೊ ಕೂಸ ಮೊಯ್ಲಿ, ಯಕ್ಷಗಾನ ಕಲೆ ಈ ಕಾಲಘಟ್ಟದಲ್ಲಿ ಇನ್ನಷ್ಟು ಕ್ರಿಯಾಶೀಲತೆ ರೂಢಿಸಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ಬಿ.ಎಂ. ರಾವ್, ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣಾ ವೇದಿಕೆಯ ಕೋಶಾಕಾರಿ ಪ್ರೊ.ಗಿರಿಧರ್ ಹತ್ವಾರ್, ಅಗರಿ ದಿನೇಶ ರಾವ್, ಗೌರವಾಧ್ಯಕ್ಷ ಅಗರಿ ರಘುರಾಮ ಭಾಗವತ್, ಅಧ್ಯಕ್ಷ ಪಿ.ಪರಮೇಶ್ವರ ಐತಾಳ್, ಅಗರಿ ಭಾಸ್ಕರ ರಾವ್, ಗಣೇಶಪುರ ಗಿರೀಶ್ ನಾವುಡ, ಪ್ರಸಿದ್ಧ ಪಣಂಬೂರು ಉಪಸ್ಥಿತರಿದ್ದರು.
ನಿತ್ಯಾನಂದ ಕಾರಂತ ಪೊಳಲಿ ಅಭಿನಂದನಾ ಪತ್ರ ವಾಚಿಸಿದರು. ಪ್ರೊ. ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು.
ಪಿ. ಶ್ರೀಧರ್ ಐತಾಳ್ ಸ್ವಾಗತಿಸಿದರು. ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣಾ ವೇದಿಕೆ ಕಾರ್ಯದರ್ಶಿ ಅಗರಿ ರಾಘವೇಂದ್ರ ರಾವ್ ವಂದಿಸಿದರು. ಗೋವಿಂದದಾಸ ಕಾಲೇಜಿನ ಯಕ್ಷಗಾನ ಮತ್ತು ಲಲಿತ ಕಲಾ ಅಧ್ಯಯನ ಕೇಂದ್ರದ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕೃಪೆ :
vijaykarnataka
|
|
|